ರಾಮ ಭಕ್ತರಿಗೆ ಸಿಹಿ ಸುದ್ದಿ - ಚೆನ್ನೈ, ಬೆಂಗಳೂರು, ಮುಂಬೈನಿಂದ ಅಯೋಧ್ಯೆಗೆ ಫೆಬ್ರವರಿ 1 ರಿಂದ ನಾನ್ಸ್ಟಾಪ್ ವಿಮಾನ ಸೇವೆ

ನವದೆಹಲಿ : ರಾಮ ಭಕ್ತರಿಗೆ ಸ್ಪೈಸ್ ಜೆಟ್ ಸಿಹಿ ಸುದ್ದಿ ನೀಡಿದೆ. ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಎನಿಸಿಕೊಂಡಿರುವ ಸ್ಪೈಸ್ ಜೆಟ್, ಫೆಬ್ರವರಿ 2024 ರಿಂದ ಅಯೋಧ್ಯೆಯನ್ನು ಮೂರು ಭಾರತೀಯ ನಗರಗಳೊಂದಿಗೆ ಸಂಪರ್ಕಿಸುವ ತಡೆರಹಿತ ವಿಮಾನಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.
ಸ್ಪೈಸ್ ಜೆಟ್ ವಿಮಾನಗಳು ಫೆಬ್ರವರಿ 1 ರಿಂದ ಮುಂಬೈ, ಬೆಂಗಳೂರು ಮತ್ತು ಚೆನ್ನೈನೊಂದಿಗೆ ಅಯೋಧ್ಯೆಯನ್ನು ಸಂಪರ್ಕಿಸಲಿವೆ. ಏರ್ಲೈನ್ ತನ್ನ 189 ಆಸನಗಳ ಬೋಯಿಂಗ್ 737 ವಿಮಾನವನ್ನು ಮೇಲೆ ತಿಳಿಸಿದ ಮಾರ್ಗಗಳಲ್ಲಿ ನಿಯೋಜಿಸಲಿದೆ.
ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ವಿಶೇಷ ವಿಮಾನ ಸೇವೆ ಒದಗಿಸುತ್ತದೆ. ಶೀಘ್ರದಲ್ಲೇ ಅಯೋಧ್ಯೆಯನ್ನು ಭಾರತದಾದ್ಯಂತ ಹಲವಾರು ಪ್ರಮುಖ ನಗರಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಏರ್ಲೈನ್ ಹೊಂದಿದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.