ಹುಬ್ಬಳ್ಳಿ: ಪಾಲಿಕೆ ನೂತನ ಆಯುಕ್ತರಾಗಿ ಆಗಿ ಮಂಜುನಾಥ ಡೊಂಬರ ನೇಮಕ

ಹುಬ್ಬಳ್ಳಿ: ಪಾಲಿಕೆ ನೂತನ ಆಯುಕ್ತರಾಗಿ ಆಗಿ ಮಂಜುನಾಥ ಡೊಂಬರ ನೇಮಕ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಂಜುನಾಥ ಡೊಂಬರ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಿ ಸರಕಾರ ಆದೇಶ ನೀಡಿದೆ. ಈ ಹಿಂದೆ ಕಮಿಷನರ್ ಆಗಿದ್ದ ಡಾ. ರುದ್ರೇಶ ಘಾಳಿ ಅವರನ್ನು ಧಾರವಾಡ ಎಜ್ಯುಕೇಷನ್ ಕಮಿಷನರ್ ಸ್ಥಾನಕ್ಕೆ ನಿನ್ನೆ ಬುಧವಾರ ವರ್ಗಾವಣೆ ಆಗಿತ್ತು. 

ಮಂಜುನಾಥ ಡೊಂಬರ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯಾಗಿದ್ದು ಇನ್ಮುಂದೆ ಪಾಲಿಕೆಯ ಕಮಿಷನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.