ವಕ್ಫ್‌ ಕಾಯ್ದೆಗೆ ತಿದ್ದುಪಡಿ: ಓವೈಸಿ, ತೇಜಸ್ವಿ ಸೂರ್ಯ ಸೇರಿ 21 ಸದಸ್ಯರ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ವಕ್ಫ್‌ ಕಾಯ್ದೆಗೆ ತಿದ್ದುಪಡಿ: ಓವೈಸಿ, ತೇಜಸ್ವಿ ಸೂರ್ಯ ಸೇರಿ 21 ಸದಸ್ಯರ ಸಮಿತಿ ರಚಿಸಿದ ಕೇಂದ್ರ ಸರ್ಕಾರ
ವಕ್ಫ್‌ ಕಾಯ್ದೆಗೆ ತಿದ್ದುಪಡಿ: ಓವೈಸಿ, ತೇಜಸ್ವಿ ಸೂರ್ಯ ಸೇರಿ 21 ಸದಸ್ಯರ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ವಕ್ಫ್‌ ಮಂಡಳಿಯ ಪರಮಾಧಿಕಾರವನ್ನು ರದ್ದುಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗಾಗಿ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಬೆನ್ನಲ್ಲೇ, ವಿಧೇಯಕದ ಪರಿಶೀಲನೆಗಾಗಿ ಕೇಂದ್ರ ಸರ್ಕಾರವು ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ, ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಸೇರಿ 21 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು ರಚಿಸಿದೆ. 

ಜಗದಾಂಬಿಕಾ ಪಾಲ್‌, ನಿಶಿಕಾಂತ್‌ ದುಬೆ, ತೇಜಸ್ವಿ ಸೂರ್ಯ, ಅಪರಾಜಿತ ಸಾರಂಗಿ, ಸಂಜಯ್‌ ಜೈಸ್ವಾಲ್‌, ದಿಲೀಪ್‌ ಸೈಕಿಯಾ, ಗೌರವ್‌ ಗೊಗೊಯ್‌, ಇಮ್ರಾನ್‌ ಮಸೂದ್‌, ಮೊಹಮ್ಮದ್‌ ಜಾವೇದ್‌, ಕಲ್ಯಾಣ್‌ ಬ್ಯಾನರ್ಜಿ, ಎ ರಾಜಾ, ಅರವಿಂದ್‌ ಸಾವಂತ್‌, ಸುರೇಶ್‌ ಗೋಪಿನಾಥ್‌, ಅಸಾದುದ್ದೀನ್‌ ಓವೈಸಿ ಸೇರಿ ಪ್ರತಿಪಕ್ಷಗಳು, ಆಡಳಿತ ಪಕ್ಷಗಳ 21 ಸದಸ್ಯರಿದ್ದಾರೆ.