ಮಳೆ ಇಳಿಮುಖ: ಧಾರವಾಡ ಜಿಲ್ಲಾದ್ಯಂತ ನಾಳೆ ಶಾಲೆ, ಕಾಲೇಜುಗಳು ಪುನರಾರಂಭ

ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಇಂದು ಮಳೆಯ ಪ್ರಮಾಣ ಇಳಿಮುಖವಾಗಿದೆ. ನಾಳೆ ಮೇ.21 ರಂದು ಶಾಲೆ, ಕಾಲೇಜುಗಳು ಮತ್ತೆ ಕಾರ್ಯನಿರ್ವಹಿಸಲಿದ್ದು, ತರಗತಿಗಳು ಎಂದಿನಂತೆ ನಡೆಯಲಿವೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.