ಧಾರವಾಡ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚರಿಸಲು ಮನವಿ ಸಲ್ಲಿಸಿದ ಸಚಿವ ಜೋಶಿ

ಹುಬ್ಬಳ್ಳಿ: ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 400 ವಂದೇ ಭಾರತ್ ರೈಲುಗಳನ್ನು ಸಂಚರಿಸಲು 2022 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದರಲ್ಲಿ ಒಂದು ರೈಲನ್ನು ಧಾರವಾಡ- ಬೆಂಗಳೂರು ನಡುವೆ ಓಡಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಅದರಂತೆ ವಂದೇ ಭಾರತ್ ರೈಲು ಧಾರವಾಡ - ಬೆಂಗಳೂರು ನಡುವೆ ಸಂಚರಿಸಲಿದೆ.