ಹುಬ್ಬಳ್ಳಿ: ಡೇಟ್ ಬಾರ್ ಆದ 7 ಲಕ್ಷರೂ .ಮೌಲ್ಯದ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು

ಹುಬ್ಬಳ್ಳಿ: ಅವಧಿ ಮೀರಿದ ಹಾಗೂ ಕೆಎಸ್ಬಿಸಿಎಲ್ ಡಿಪೋದಲ್ಲಿ ಬಹಳ ವರ್ಷಗಳಿಂದ ಮಾರಾಟವಾಗದೆ ಉಳಿದಿರುವ ಅಂದಾಜು 7 ಲಕ್ಷ ರೂ . ಮೌಲ್ಯದ ಮದ್ಯವನ್ನು ನಗರದ ಭೈರಿದೇವರಕೊಪ್ಪದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಡಿಪೋ ಆವರಣದ ಹೊರಭಾಗದ ಇಂಗು ಗುಂಡಿಯಲ್ಲಿ ಶುಕ್ರವಾರ ನಾಶಪಡಿಸಲಾಯಿತು. ಅವಧಿ ಮೀರಿದ ಅಂದಾಜು 7.01 ಲಕ್ಷ ರೂ . ಮೌಲ್ಯದ 47 ಪೆಟ್ಟಿಗೆ ಹಾಗೂ 67 ಮದ್ಯದ ಬಾಟಲಿಗಳನ್ನು ನಾಶಪಡಿಸಲಾಯಿತು.ಈ ಸಂದರ್ಭದಲ್ಲಿ ಅಬಕಾರಿ ವಿಭಾಗದ ಅನಿಲಕುಮಾರ ನಂದೀಶ್ವರ , ಅಬಕಾರಿ ಇನ್ಸ್ಪೆಕ್ಟರ್ ನೇತ್ರಾ ಉಪ್ಪಾರ , ಉಪಾಧೀಕ್ಷಕ ನಯನಾ ನಾಯ್ಕ ಕೆಎಸ್ಬಿಸಿಎಲ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಇದ್ದರು.