ಬೆಂಗಳೂರು : ಡಿಸಿಎಂ ಡಿ.ಕೆ ಶಿವಕುಮಾರ್ಗೆ ಮತ್ತೊಂದು ಸಂಕಷ್ಟ

ಬೆಂಗಳೂರು : ಅಕ್ರಮ ಆಸ್ತಿ ಪ್ರಕರಣ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಲೋಕಾಯುಕ್ತ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಎಫ್ಐಆರ್ ದಾಖಲು ಮಾಡಿದೆ.
ಇತ್ತೀಚೆಗಷ್ಟೇ ಸಿಬಿಐ ತನಿಖೆ ವಾಪಸ್ ಪಡೆಯುವ ಬಗ್ಗೆ ಸಂಪುಟದಲ್ಲಿ ಸರ್ಕಾರ ತೀರ್ಮಾನ ತೆಗದುಕೊಂಡಿದ್ದು, ಸಿಬಿಐ ಬದಲು ಲೋಕಾಯುಕ್ತಗೆ ಸರ್ಕಾರ ತನಿಖೆ ಮಾಡಲು ವರ್ಗಾವಣೆ ಮಾಡಿದೆ. ಇದೀಗ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಲೋಕಾಯುಕ್ತ ಎಫ್ಐಆರ್ ದಾಖಲು ಮಾಡಿದ್ದು, ಒಂದು ಕಡೆ ಸಿಬಿಐನಿಂದ ಡಿಕೆ ಶಿವಕುಮಾರ್ ನೋಟಿಸ್ ಮತ್ತೊಂದು ಕಡೆ ಲೋಕಾಯುಕ್ತದಿಂದ ಫೆಬ್ರವರಿ 8 ರಂದು ಎಫ್ಐಆರ್ ದಾಖಲಾಗಿದೆ. ಕನಕಪುರ ಬಂಡೆಗೆ ಅಕ್ರಮ ಆಸ್ತಿ ಪ್ರಕರಣ ನಿಲ್ಲದ ಉರುಳಾಗಿದೆ.