ಬಾಲ ರಾಮ ಪ್ರಾಣ ಪ್ರತಿಷ್ಠಾಪನೆ: ಜನವರಿ 22ರಂದು ರಿಲಯನ್ಸ್ ಕಚೇರಿಗಳಿಗೆ ರಜೆ ಘೋಷಿಸಿದ ಅಂಬಾನಿ

ನವದೆಹಲಿ: ನಾಳೆ (ಜನವರಿ 22ರಂದು) ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಉದ್ಯಮಿ ಮುಖೇಶ್ ಅಂಬಾನಿ ದೊಡ್ಡ ಘೋಷಣೆ ಮಾಡಿದ್ದಾರೆ.
ಹೌದು. ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನ ಎಂಡಿ ಮುಕೇಶ್ ಅಂಬಾನಿ ಅವರು ತಮ್ಮ ಎಲ್ಲಾ ಉದ್ಯೋಗಿಗಳಿಗೆ ರಿಲಯನ್ಸ್ ಇಂಡಸ್ಟ್ರೀಸ್ನ ಎಲ್ಲಾ ಕಚೇರಿಗಳಲ್ಲಿ ಜನವರಿ 22ರಂದು ರಜೆ ಘೋಷಿಸಿದ್ದಾರೆ. ಜನವರಿ 22 ರಾಮಮಂದಿರ ಪ್ರಾಣ ಪ್ರತಿಷ್ಠೆಯ ದಿನ ಜನವರಿ 22 ರಂದು ಸಾರ್ವಜನಿಕ ರಜೆ ಘೋಷಿಸುವ ಮಹಾರಾಷ್ಟ್ರ ಸರ್ಕಾರದ ಘೋಷಣೆಯ ನಂತರ ಅಂಬಾನಿ ಈ ಘೋಷಣೆಯನ್ನು ಮಾಡಿದ್ದಾರೆ.
ಜನವರಿ 22 ರಂದು ರಜೆ ಘೋಷಿಸುವ ಮೊದಲು, ಕಂಪನಿಯು 2023-24ರ ಹಣಕಾಸು ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಬಹಿರಂಗಪಡಿಸಿತ್ತು. ಕಂಪನಿಯು ಏಕೀಕೃತ ನಿವ್ವಳ ಲಾಭದಲ್ಲಿ 17,706 ಕೋಟಿ ರೂಪಾಯಿಗಳಿಂದ 19,641 ಕೋಟಿ ರೂಪಾಯಿಗೆ 11% ಹೆಚ್ಚಳವನ್ನು ಘೋಷಿಸಿದೆ.