ಹುಬ್ಬಳ್ಳಿ: ಜಯಪ್ರಕಾಶ ಹೊಟೇಲ್ ದಲ್ಲಿ ವ್ಯಕ್ತಿ ಆತ್ಮಹತ್ಯೆ

ಹುಬ್ಬಳ್ಳಿ: ವ್ಯಕ್ತಿಯೋರ್ವ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಿಲಿಜನ್ ರಸ್ತೆಯ ಕಾಟಾ ಮಾರ್ಕೆಟ್ ನಲ್ಲಿರುವ ಜಯಪ್ರಕಾಶ್ ಹೊಟೇಲ್ನಲ್ಲಿ ನಡೆದಿದೆ. ರಮೇಶ ಗುಡ್ಡಪ್ಪ ಕೊರಗರ ಎಂಬಾತನೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಜೋಯಿಸರ ಹರಳಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ. ಈತ ಕಳೆದ 8 ದಿನಗಳಿಂದ ಇದೇ ಹೊಟೇಲ್ನಲ್ಲಿ ವಾಸವಾಗಿದ್ದೆನ್ನಲಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.