ಧಾರವಾಡ: ಪಾದಚಾರಿಗೆ ಗುದ್ದಿದ ಚಿಗರಿ

ಧಾರವಾಡ: ಪಾದಚಾರಿಗೆ ಗುದ್ದಿದ ಚಿಗರಿ

ಧಾರವಾಡ: ರಸ್ತೆ ದಾಟಿ ಹೊರಟಿದ್ದ ಪಾದಚಾರಿಯೊಬ್ಬರಿಗೆ ಬಿಆರ್‌ಟಿಎಸ್‌ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಕೋರ್ಟ್‌ ವೃತ್ತದ ಬಳಿ ನಡೆದಿದೆ. 

 

ಮಲ್ಲಣ್ಣ ಎಂಬಾತನೇ ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿ. ಬಿಆರ್‌ಟಿಎಸ್ ಬಸ್ ನಿಲ್ದಾಣದಿಂದ ಈ ವ್ಯಕ್ತಿ ಇಳಿದು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 

 

ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.