ಬ್ರೇಕಿಂಗ್: ಡಿಕೆಶಿಗೆ ಬೆಂಗಳೂರು, ಹೆಬ್ಬಾಳ್ಕರ್ಗೆ ಉಡುಪಿ ಉಸ್ತುವಾರಿ- ಯಾವ ಜಿಲ್ಲೆಯ ಉಸ್ತುವಾರಿ ಯಾರಿಗೆ? ಇಲ್ಲಿದೆ ಪಟ್ಟಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ತಲೆನೋವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನು ಪೂರ್ಣಗೊಳಿಸಲಾಗಿದೆ. ಕೆಲ ಜಿಲ್ಲೆಗಳಿಗೆ ಪಟ್ಟು ಹಿಡಿದ್ದ ನಾಯಕರಿಗೆ ಬೇರೊಂದು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ನಗರ ಉಸ್ತುವಾರಿ ಪಡೆದುಕೊಳ್ಳುವಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಡಾ.ಜಿ ಪರಮೇಶ್ವರ್ ತಮ್ಮ ಸ್ವಂತ ಜಿಲ್ಲೆ ತುಮಕೂರು ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಯಾವ ಜಿಲ್ಲೆಯ ಉಸ್ತುವಾರಿ ಯಾರಿಗೆ?
* ಡಿ.ಕೆ ಶಿವಕುಮಾರ್ - ಬೆಂಗಳೂರು ನಗರ
* ಡಾ. ಜಿ. ಪರಮೇಶ್ವರ - ತುಮಕೂರು
* ಹೆಚ್.ಕೆ ಪಾಟೀಲ್ - ಗದಗ
* ಕೆ.ಹೆಚ್ ಮುನಿಯಪ್ಪ - ಬೆಂಗಳೂರು ಗ್ರಾಮಾಂತರ
* ಎಂಬಿ ಪಾಟೀಲ್ - ವಿಜಯಪುರ
* ಹೆಚ್ಸಿ ಮಹದೇವಪ್ಪ - ಮೈಸೂರು
* ಪ್ರಿಯಾಂಕ್ ಖರ್ಗೆ - ಕಲಬುರಗಿ
* ರಾಮಲಿಂಗರೆಡ್ಡಿ - ರಾಮನಗರ
* ಲಕ್ಷ್ಮೀ ಹೆಬ್ಬಾಳ್ಕರ್ - ಉಡುಪಿ
* ದಿನೇಶ್ ಗಂಡೂರಾವ್ - ದಕ್ಷಿಣ ಕನ್ನಡ
* ಜಾರ್ಜ್ - ಚಿಕ್ಕಮಗಳೂರು
* ಜಮೀರ್ ಅಹ್ಮದ್ ಖಾನ್ - ವಿಜಯನಗರ
* ಕೆ ಎನ್ ರಾಜಣ್ಣ - ಹಾಸನ
* ಮಧು ಬಂಗಾರಪ್ಪ - ಶಿವಮೊಗ್ಗ
* ಶಿವಾನಂದ ಪಾಟೀಲ್ - ಹಾವೇರಿ
* ಬೋಸರಾಜು - ಕೊಡಗು
* ಬೈರತಿ ಸುರೇಶ್ - ಕೋಲಾರ
* ಶರಣ್ ಪ್ರಕಾಶ ಪಾಟೀಲ್ - ರಾಯಚೂರು
* ಕೆ ವೆಂಕಟೇಶ - ಚಾಮರಾಜನಗರ
* ಸತೀಶ್ ಜಾರಕಿಹೊಳಿ - ಬೆಳಗಾವಿ
* ಶರಣಬಸಪ್ಪ ದರ್ಶನಾಪುರ - ಯಾದಗಿರಿ
* ಈಶ್ವರ್ ಖಂಡ್ರೆ - ಬೀದರ್
* ಎನ್ ಚೆಲುವರಾಯಸ್ವಾಮಿ - ಮಂಡ್ಯ
* ಎಸ್ಎಸ್ ಮಲ್ಲಿಕಾರ್ಜುನ - ದಾವಣಗೆರೆ
* ಸಂತೋಷ್ ಲಾಡ್ - ಧಾರವಾಡ
* ಆರ್ಬಿ ತಿಮ್ಮಾಪೂರ - ಬಾಗಲಕೋಟೆ
* ಶಿವರಾಜ ತಂಗಡಗಿ - ಕೊಪ್ಪಳ
* ಡಿ ಸುಧಾಕರ್ - ಚಿತ್ರದುರ್ಗ
* ನಾಗೇಂದ್ರ - ಬಳ್ಳಾರಿ
* ಮಂಕಾಳ್ ವೈದ್ಯ - ಉತ್ತರ ಕನ್ನಡ
* ಎಂಸಿ ಸುಧಾಕರ್ - ಚಿಕ್ಕಬಳ್ಳಾಪುರ