ಅಂಬೇಡ್ಕರ್ ಜಯಂತಿಯಂದೇ ಪುತ್ಥಳಿ ಎತ್ತೊಯ್ದ ದುರ್ಷರ್ಮಿಗಳು

ಅಂಬೇಡ್ಕರ್ ಜಯಂತಿಯಂದೇ ಪುತ್ಥಳಿ ಎತ್ತೊಯ್ದ ದುರ್ಷರ್ಮಿಗಳು

ಹುಬ್ಬಳ್ಳಿ: ದೇಶಾದ್ಯಂತ ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಗಾಂಧಿವಾಡದಲ್ಲಿ ಪ್ರತಿಷ್ಟಾಪನೆ ಮಾಡಿದ್ದ ಅಂಬೇಡ್ಕರ್ ಮೂರ್ತಿಯನ್ನು ದುಷ್ಕರ್ಮಿಗಳು ಎತ್ತೊಯ್ದಿದ್ದಾರೆ. ಆರ್.ಜಿ.ಎಸ್ ರೈಲ್ವೆ ಜಾಗೆಯಲ್ಲಿ ಸ್ಥಳೀಯರು ಕಟ್ಟೆಯೊಂದನ್ನು ನಿರ್ಮಾಣ ಮಾಡಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದರು. ಆದರೆ ದುಷ್ಕರ್ಮಿಗಳು ಏಕಾಏಕಿ ಮೂರ್ತಿಯನ್ನು ತೆರುವುಗೊಳಿಸಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಈ ಘಟನೆಗೆ ಕೇಶ್ವಾಪೂರ ಪೊಲೀಸರು ಸಾಥ್ ನೀಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.